ಯಕ್ಷ ಕಲಾನಿಧಿಧಿ ಪ್ರಶಸ್ತಿಗೆ ಪಾತಾಳ ವೆಂಕಟರಮಣ ಭಟ್ಟ ಆಯ್ಕೆ
ಲೇಖಕರು : ವಿಜಯ ಕರ್ನಾಟಕ
ಭಾನುವಾರ, ಜೂನ್ 12 , 2016
|
ಜೂನ್ 12 , 2016
|
ಯಕ್ಷ ಕಲಾನಿಧಿಧಿ ಪ್ರಶಸ್ತಿಗೆ ಪಾತಾಳ ವೆಂಕಟರಮಣ ಭಟ್ಟ ಆಯ್ಕೆ
ಮಂಗಳೂರು :
ಅಕಾಡೆಮಿ ಆಫ್ ತೆಂಕುತಿಟ್ಟು ಯಕ್ಷ ಗಾನ ವತಿಯಿಂದ ನೀಡುವ ಯಕ್ಷ ಕಲಾನಿಧಿ ಪ್ರಶಸ್ತಿಗೆ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟ ಆಯ್ಕೆ ಆಗಿದ್ದಾರೆ.
ಕೇಂದ್ರ ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಂಪನ್ಮೂಲ ತರಬೇತಿ ಕೇಂದ್ರದ (ಸಿಸಿಆರ್ಟಿ) ನಿರ್ದೇಶಕ ಗಿರೀಶ್ ಜೋಶಿ ಅಧ್ಯಕ್ಷ ತೆಯಲ್ಲಿ ಜೂ.12 ರಂದು ಹೊಸದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೇಂದ್ರ ಕಾನೂನು ಇಲಾಖೆ ಜಂಟಿ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಪ್ರಾಧ್ಯಾಪಕ ಡಾ. ಪುರುಷೊತ್ತಮ ಬಿಳಿಮಲೆ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾತಾಳ ಕುರಿತು ಸಾಕ್ಷ ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಪ್ರಶಸ್ತಿ 20 ಸಾವಿರ ನಗದು, ಸನ್ಮಾನ ಫಲಕ, ನೆನಪಿನ ಕಾಣಿಕೆ ಒಳಗೊಂಡಿದೆ. ಕಡಂದೇಲು ಪುರುಷೋತ್ತಮ ಭಟ್, ಪೆರುವೋಡಿ ನಾರಾಯಣ ಭಟ್, ಮಿಜಾರು ಅಣ್ಣಪ್ಪ, ಡಾ.ಕೋಳ್ಯೂರು ರಾಮಚಂದ್ರ ರಾವ್, ಮಲ್ಪೆ ರಾಮದಾಸ ಸಾಮಗ, ಕುಂಬಳೆ ಸುಂದರ ರಾವ್, ಸೂರಿ ಕುಮೇರಿ ಗೋವಿಂದ ಭಚ್, ಬಲಿಪ ನಾರಾಯಣ ಭಾಗವತ ಹಾಗೂ ಸಂಪಾಜೆ ಶೀನಪ್ಪ ರೈ ಅವರಿಗೆ ಈ ಹಿಂದೆ ಯಕ್ಷ ಕಲಾನಿಧಿ ಪ್ರಶಸ್ತಿ ನೀಡಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ದಿಲ್ಲಿಯಲ್ಲಿ ಕರ್ಣ ಭೇದನ ಎಂಬ ಪ್ರಸಂಗದ ತಾಳ ಮದ್ದಳೆ ನಡೆಯಲಿದ್ದು, ಅರ್ಥದಾರಿ ವಾಸುದೇವ ರಂಗಾ ಭಟ್, ಭಾಗವತ ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ಕೃಷ್ಣಪ್ರಕಾಶ್ ಉಳಿತ್ತಾಯರು ಸಹಕರಿಸುವರು. ವಿದ್ಯಾ ಕೋಳ್ಯೂರು ಮತ್ತು ಡಾ.ಪುರುಷೋತ್ತಮ ಬಿಳಿಮಲೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೃಪೆ :
vijaykarnataka
|
|
|